ಬನ್ನಿ ನಾವು ಬದಲಾಗೋಣ ಬನ್ನಿ
ಎಲ್ಲ ಮರೆತು ಒಂದಾಗೋಣ ಕೈತನ್ನಿ
ಸಿಟ್ಟು-ಸೆಡವು ಕಟ್ಟಿ ಬದಿಗಿಟ್ಟು
ವೈಮನಸ್ಸು ಬಿಟ್ಟು ಪಣ ತೊಟ್ಟು
ಯಾಕೆ ದ್ವೇಷ ಯಾಕೆ ಅಸೂಯೆ
ಯಾಕೆ ಸುಮ್ಮನೇ ಮದ-ಮಾತ್ಸರ್ಯ?
ಮರೆತು ತಾತ್ಸಾರ, ಗಳಿಸಿ ಪ್ರೀತಿ-ಸ್ನೇಹ
ಬೆರೆತು ಬಾಳಲು ಏನು ಆಶ್ಚರ್ಯ!
ತಪ್ಪು ಒಪ್ಪು ಏನೇ ಇರಲಿ
ಹಿಡಿ ಆತ್ಮಾವಲೋಕನ ಕನ್ನಡಿ
ಪಾಪಪ್ರಜ್ಞೆ ಮನ ಕಾಡದಿರಲಿ
ಪ್ರಾಯಶ್ಚಿತ್ತದಿಯಾದರೂ ಸತ್ಯ ನುಡಿ
ಹುಟ್ಟು ಸಾವು ಹಳಿಯ ಮೇಲೆ
ಹೊರಟ ಬದುಕು ರೈಲುಬಂಡಿ
ನಡುವೆ ಎಂದೆಂದೂ ಕಳಚದಿರಲಿ
ಮಧುರ ಬಾಂಧವ್ಯದ ಕೊಂಡಿ
ಶುದ್ಧಮನ ಶುದ್ಧಆತ್ಮ ಶುದ್ಧಜೀವನ
ಶುದ್ಧಬುದ್ಧಿಯಿಂದ ನಡೆ ಬದುಕು ಪಾವನ
ಛಿದ್ರಗೊಂಡ ಹೃದಯ ವೈಶಾಲ್ಯತೆ
ಬೆಸೆದು, ಹಾಡು ಮತ್ತೆ ಐಕ್ಯ ಗಾನ
- ಚೆನ್ನವೀರ ಸಗರನಾಳ
ಎಲ್ಲ ಮರೆತು ಒಂದಾಗೋಣ ಕೈತನ್ನಿ
ಸಿಟ್ಟು-ಸೆಡವು ಕಟ್ಟಿ ಬದಿಗಿಟ್ಟು
ವೈಮನಸ್ಸು ಬಿಟ್ಟು ಪಣ ತೊಟ್ಟು
ಯಾಕೆ ದ್ವೇಷ ಯಾಕೆ ಅಸೂಯೆ
ಯಾಕೆ ಸುಮ್ಮನೇ ಮದ-ಮಾತ್ಸರ್ಯ?
ಮರೆತು ತಾತ್ಸಾರ, ಗಳಿಸಿ ಪ್ರೀತಿ-ಸ್ನೇಹ
ಬೆರೆತು ಬಾಳಲು ಏನು ಆಶ್ಚರ್ಯ!
ತಪ್ಪು ಒಪ್ಪು ಏನೇ ಇರಲಿ
ಹಿಡಿ ಆತ್ಮಾವಲೋಕನ ಕನ್ನಡಿ
ಪಾಪಪ್ರಜ್ಞೆ ಮನ ಕಾಡದಿರಲಿ
ಪ್ರಾಯಶ್ಚಿತ್ತದಿಯಾದರೂ ಸತ್ಯ ನುಡಿ
ಹುಟ್ಟು ಸಾವು ಹಳಿಯ ಮೇಲೆ
ಹೊರಟ ಬದುಕು ರೈಲುಬಂಡಿ
ನಡುವೆ ಎಂದೆಂದೂ ಕಳಚದಿರಲಿ
ಮಧುರ ಬಾಂಧವ್ಯದ ಕೊಂಡಿ
ಶುದ್ಧಮನ ಶುದ್ಧಆತ್ಮ ಶುದ್ಧಜೀವನ
ಶುದ್ಧಬುದ್ಧಿಯಿಂದ ನಡೆ ಬದುಕು ಪಾವನ
ಛಿದ್ರಗೊಂಡ ಹೃದಯ ವೈಶಾಲ್ಯತೆ
ಬೆಸೆದು, ಹಾಡು ಮತ್ತೆ ಐಕ್ಯ ಗಾನ
- ಚೆನ್ನವೀರ ಸಗರನಾಳ
No comments:
Post a Comment